ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Showing posts with label ಕೆಳದಿ ಕವಿ ಮನೆತನದ ಮೂಲ ಪುರುಷರು. Show all posts
Showing posts with label ಕೆಳದಿ ಕವಿ ಮನೆತನದ ಮೂಲ ಪುರುಷರು. Show all posts

Thursday, September 16, 2010

ವೆಂಕ ಕವಿ (ವೆಂಕಭಟ್ಟ - ವೆಂಕಣ್ಣ ) ಪತ್ನಿ-ದೇವಮ್ಮ


ಕ್ರಿ.ಶ.1770ರಲ್ಲಿದ್ದ ವೆಂಕ ಕವಿ, ಕವಿ ಲಿಂಗಣ್ಣನ ಮಗ. ನರಹರಿ ವಿಜಯ - ಈ ಕವಿ ಬರೆದ ಕಾವ್ಯ (ಭಾಮಿನಿ ಷಟ್ಪದಿಯಲ್ಲಿ). ಇದರಲ್ಲಿ 85 ಪದ್ಯಗಳು ಮತ್ತು 7 ಗರಿಗಳಿದ್ದು ಇದು ನೃಸಿಂಹಾವತಾರಕ್ಕೆ ಸಂಬಂಧಿಸಿದ ಕಾವ್ಯ. ಇದಲ್ಲದೇ ಗಣ ಸಹಸ್ರನಾಮ (ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಷಟ್ಪದಿಗಳೂ 100 ಮತ್ತು 1 ವಚನ - ಒಟ್ಟು 101 ಪದ್ಯ ಸಂಖ್ಯೆಯುಳ್ಳ ಕಿರುಕೃತಿ) ಮತ್ತು ಪಾರ್ವತಿ ವಲ್ಲಭ ಶತಕ (ಇದೊಂದು ನೀತಿ ಶತಕ - ದೈವಭಕ್ತಿ, ಗುರುಭಕ್ತಿ, ಗುರು-ಹಿರಿಯರಲ್ಲಿ ಶ್ರಧ್ದೆ, ಧರ್ಮದಲ್ಲಿ ಒಲವು ಹಾಗೂ ನಿಷ್ಠೆಯ ನಿಲುವನ್ನು ನಿರೂಪಿಸುವ ಒಂದು ತಾತ್ವಿಕ ಗ್ರಂಥ - 101 ಪದ್ಯಗಳಿವೆ) ಎಂಬ ಕೃತಿಯನ್ನೂ ರಚಿಸಿದ್ದಾರೆ. ಇತ್ತೀಚೆಗೆ ಇದನ್ನು ಕೆಳದಿಯ ಡಾ:ವೆಂಕಟೇಶ್ ಜೊಯಿಸರವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಕೆಳದಿ ಶ್ರೀ ರಾಮೇಶ್ವರ ದೇವರನ್ನು ಮತ್ತು ಕುಲದೇವರಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತನಾಮವನ್ನಾಗಿಟ್ಟುಕೊಂಡು ಈ ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀರ್ತನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು "ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು" ಎಂಬ ಪುಸ್ತಕದಲ್ಲಿ ಸಂಪಾದಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (1977). ಈ ಕವಿಯು ಮೂಕಾಂಬಿಕೆಯ ಮೇಲೆ ರಚಿಸಿದ ಒಂದು ಕೀರ್ತನೆಯ ತಾಡವೋಲೆಯು ಲಭಿಸಿದ್ದು ಅದನ್ನು ಕೊನೆಯಲ್ಲಿ ಪ್ರಸ್ತುತಿ ಪಡಿಸಲಾಗಿದೆ. ಅನೇಕ ಹಾಡುಗಳಿಗೆ ಸಂಗೀತ ಶಾಸ್ತ್ರದಲ್ಲಿ ಹೇಳಿದ ರಾಗಗಳನ್ನು ತಾಳೆಗರಿಯಲ್ಲಿ ಕವಿಯು ಸೂಚಿಸಿದ್ದು, ಇದರಿಂದ ಕವಿಗೆ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತಿಳಿಯಬಹುದಾಗಿದೆ. ಈ ಕೃತಿಗಳಲ್ಲಿ ಮೂಡಿರುವ ಕೆಲವು ಅತ್ಯಂತ ಮಾರ್ಮಿಕವಾದ, ದಾರ್ಶನಿಕವಾದ ಹಾಗೂ ಭಕ್ತಿ ಭಾವದ ಕೆಲವು ಸಾಲುಗಳನ್ನೂ ಕೂಡ ಕೊನೆಯಲ್ಲಿ ನೀಡಲಾಗಿದೆ. ಮಾನವನ ಜೀವನದ ಸಾರ್ಥ್ಯಕ್ಕೆ ಬೇಕಾದ ಎಲ್ಲಾ ಒಳಗುಟ್ಟುಗಳೂ ಈ ಕೃತಿಗಳಲ್ಲಿ ಅಡಗಿದೆಯೆಂದರೆ ಅತಿಶಯೋಕ್ತಿಯಾಗಲಾರದು.

ತಾಡೆಯೋಲೆ ಕೃತಿ: ರಾಗ: ಮಧ್ಯಮಾವತಿ - ತಾಳ: ಆದಿತಾಳ

ಮಂಗಲಂ ಜಯಮಂಗಲಂ
ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ)

ಗೌರಿಗೆ ಗುಜನನಿಗೆ ಗಿರಿಜಾತೆಗೆ
ಧೀರಮಹಿಷ ದೈತ್ಯಮರ್ಧಿನಿಗೆ
ಕಾರುಣ್ಯ ನಿಧಿಗೆ ಕಾಮಿತ ಫಲದಾತೆಗೆ
ನಾರದನುತೆಗೆ ನಾರಾಯಣಿಗೆ | 1 |

ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆ
ದುರಿತ ದಾರಿದ್ರೈ ಹರ್ತ್ರೆಗೆ ದುರ್ಗಿಗೆ
ಪರಮೇಶ್ವರಿಗೆ ಪಾವನಚರಿತೆಗೆ ಶುಭ
ಕರಿಗೆ ಸಮಸ್ತಮಂತ್ರೇಶ್ವರಿಗೆ | 2 |

ರಾಜಶೇಖರಿಗೆ ರಾಜೀವ ನೇತ್ರೆಗೆ ರಕ್ತ
ಬೀಜ ಶಾಸಿನಿಗೆ ಭುವನಮಾತೆಗೆ
ತೇಜೋಮಯಿಗೆ ತರಣಿಕೋಟಿ ಭಾಷೆಗೆ
ಶ್ರೀ ಜನಾರ್ಧನನ ಸಹೋದರಿಗೆ | 3 |

ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆ
ಕಾಳರಾತ್ರಿಗೆ ಕಾತ್ಯಾಯಿನಿಗೆ
ವ್ಯಾಳ ಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆ
ಭಾಲನೇತ್ರೆಗೆ ಭಯ ಹಾರಿಣಿಗೆ | 4 |

ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆ
ಮುಂಡಿಗೆ ಧೂಮ್ರಲೋಚನಹರ್ತ್ರೆಗೆ
ಚಂಡಮುಂಡಾಸುರರಸುರಣರಂಗದಿ
ದಿಂಡುದರಿಂದ ಸರ್ವಮಂಗಲೆಗೆ | 5 |

ಚಾರುಮ್ಮಗೆ ಭೈರವಿಗೆ ಭವಾನಿಗೆ
ಶಿವೆಗೆ ಶಾಶ್ವತಗೆ ಸೌಖ್ಯಪ್ರದೆಗೆ
ಪ್ರವಿರಳಾನಂತಲೀಲಾತ್ಮಿಕೆಗಭಿನವ
ಕುವಲಯನೀಲ ಕೋಮಲಗಾತ್ರಿಗೆ | 6 |


ಕಡುಗಲಿ ಶುಂಭನಿಶುಂಭರ ಗೆಲೆದಳ್ಗೆ
ಮೃಡನರಸಿಗೆ ಮೂಕಮರ್ದಿನಿಗೆ
ತಡೆಯದೆ ಸಕಲಜನರ ಮನೋಭೀಷ್ಟವ
ಕೊಡುವ ಕೊಲ್ಲೂರ ಶ್ರೀ ಮೂಕಾಂಬೆಗೆ | 7 |
-------------------------------------------------------------------------------------

ಕವಿ ವೆಂಕಣ್ಣನವರ ಕೀರ್ತನೆಗಳಿಂದ ಆಯ್ದ ಕೆಲವು ಸಾಲುಗಳು

ವರದಾನದಿಯ ತೀರವಾಸ ಶ್ರೀ ಕೆಳದಿಯ
ಪುರವರಾಧೀಶ ರಾಮೇಶ್ವರನ
ಪರಮಮೋಹದ ಪುತ್ರ ಪಾವನತರಗಾತ್ರ
ವರದ ಶ್ರೀ ಗಣಪತಿ ಜಯಜಯ ಜಯವೆಂದೂ
***
ಪಲ್ಲಕ್ಕಿಯ ಸಾನಂದದೊಳೇರು
ಹಲ್ಲಣಿಸಿದ ಕರಿತುರಗವನೇರು
ಎಲ್ಲಾಭರಣವನಿಟ್ಟು ಸುಖದಿಪ್ರಾಣ
ದೊಲ್ಲಭಸಹಿತ ಸಂತೋಷದೊಳಿರು ಶ್ರೀ
ಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ

*** ***

ಪರಿಮಳಿಸುವ ಪುಷ್ಪಸರಗಳ ಮುಡಿದು
ಗುರುಹಿರಿಯರ ಆಶೀರ್ವಾದವ ಪಡೆದು
ಹರುಷದಿ ಪುತ್ರಪೌತ್ರರ ಸಲಹುತ ಪತಿ
ಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕೃಪೆಯಿಂದಾ
***
ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿಕೌಶಲ್ಯದೊಳು ತಿಳಿಯಲು ನಾ-
ಗೇಂದ್ರ ನೀನಾಗು
***

ತನ್ನ ತಾನೇ ತಿಳಿಯಬೇಕು | ತೋರುವ ಲೋಕ
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ನನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು
***
ತುಲಸಿಯ ಮೂಲದೆ ನದಿಗಳು
ತುಲಸಿಯ ದಳದೊಳೆ ಶ್ರೀ ಹರಿಯು
ತುಲಸಿಯ ಶಾಖೆಯೊಳೆ ಸುರರೆಲ್ಲಾ
ನೆಲೆಸಿಹರು ಶ್ರೀ ತುಲಸಿಯ ಮಹಿಮೆಗೆಣೆಯುಂಟೇ
@@@@@@@

Wednesday, August 25, 2010

ಕೆಳದಿ ಕವಿ ಮನೆತನದ ಮೂಲಪುರುಷರು

KAVI LINGANNA - ಕವಿ ಲಿಂಗಣ್ಣ

Kavi Linganna [1499-1763 AD] was the Court Poet of the Keladi rulers. It is believed that subsequent to him, his successors have be-got the ‘sur-name’ – ‘Kavi’. His father was Venkatappa (mother’s name is not known). [However, Dr.K.N.Chitnis in his book: KELADI POLITY mentions: “The ancestors of this Lingannakavi appear to have been the Court poets under the Keladi rule”.] It is stated that he lived in Sagar and had some lands in a village called Sulagodu. He had seen the Keladi rule during its peak from close quarters and from his writings, one can infer that he lived during the period of the second Basavappa Nayaka (1739-1754). Keladi Nrupa Vijaya gives an account of the entire Keladi history till the end. Hence, it can be inferred that Kavi Linganna lived upto the end or slightly beyond the eclipse of the Keladi dynasty.

It is said that once Linganna was melodiously singing a song in front of Kollur Mookambike at Kollur with all devotion and the Keladi King who had just arrived there was greatly impressed by his singing. (It can be seen from the Keladi history that Keladi Kings also held Kollur Mookambika in very high esteem). At that time, one of the flowers fell in front of Linganna from the idol of Mookambika. Greatly impressed by his singing and this incident, the Keladi King enquired about his antecedents and appointed him as Court Poet*.

His work, ‘Keladi Nrupa Vijaya’ is known more for its historical importance than its literary features; though at several places, Kavi Linganna’s literary command is also clearly demonstrated. Besides, ‘Keladi Nrupa Vijaya’, a historical work, his other literary works include: Dakshadwara Vijaya, Shivapooja Darpana, Parvathi Parinaya and Shiva Kalyana (Yakshagaana). Kavi Linganna has included several musical compositions** in his above works and has also indicated the ‘Raaga’ of each Krithi. No doubt, Kavi Linganna was also an eminent scholar in Carnatic music and well-versed in Yakshagaana as well.
-----------------------------------------------------------------------------------------------------------
*Keladi Gunda Jois has mentioned that he had seen a reference about this in the book: “Vaideeka Dharmada Shastreeya Vichara” by Kavi Lingannaiyya, which was taken by Sri Madhava Rao, father-in-law of late GVK Rao, the then Chief Secretary to Government of Karnataka; the book is since not traceable. [Manavika Karnataka, Edition-2.1973 – Mysore University].