ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, January 5, 2012

ಸಾಧನಾ ಪಥದಲ್ಲಿ ಕೆಳದಿಕವಿಮನೆತನ

"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
  ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ"
     ದಿನಾಂಕ 25-12-2011ರಂದು ಹಾಸನದಲ್ಲಿ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದೇಶ ಸಾಧನೆಯಲ್ಲಿ ಯಶಸ್ಸು ಕಂಡಿತೆಂದರೆ ಉತ್ಪ್ರೇಕ್ಷೆಯಲ್ಲ. ಇಂದಿನ ವ್ಯವಸ್ಥೆಯಲ್ಲಿ 'ನಾವಾಯಿತು, ನಮ್ಮ ಸ್ವಂತ ಕುಟುಂಬದ ವಿಷಯವಾಯಿತು, ಇತರ ವಿಷಯಗಳಿಗೆ ಪುರುಸೊತ್ತಿಲ್ಲ' ಎನ್ನುವ ಮನಸ್ಥಿತಿಯವರೇ ಬಹಳವಿದ್ದಾಗ ಎಲ್ಲರನ್ನೂ ಜೊತೆಗೂಡಿಸಿ ಸಜ್ಜನಶಕ್ತಿಯ ಜಾಗರಣೆ ಮಾಡುವ ಮತ್ತು ಅದರಲ್ಲಿ ಪ್ರಗತಿ ಕಾಣುವ ಕೆಲಸ ಸುಲಭವೇನಲ್ಲ. ದೂರ ದೂರದ ಊರುಗಳಿಂದ ಬಂದಿದ್ದ 150 ಬಂಧುಗಳು ಅಂದು ಒಟ್ಟಿಗೆ ಸೇರಿ ಸಂಭ್ರಮಿಸಿದ ದಿನ. ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಆಶೀರ್ವಾದದೊಂದಿಗೆ ಸಂಚಾಲಕರುಗಳಾಗಿ ಹಾಸನದ ಶ್ರೀ ಕ.ವೆಂ. ನಾಗರಾಜ್ ಮತ್ತು ಶಿವಮೊಗ್ಗದ ಶ್ರೀ ಕವಿಸುರೇಶರ ಪ್ರಯತ್ನ, ಆಯೋಜಕರಾಗಿ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರು ಕೈಜೋಡಿಸಿದುದು, ಮಿತ್ರ ಹರಿಹರಪುರ ಶ್ರೀಧರರ ನೆರವು, ಸ್ಪಂದಿಸಿದ ಬಂಧುವರ್ಗದಿಂದಾಗಿ ಭಾಗವಹಿಸಿದವರೆಲ್ಲರಿಗೆ ಸ್ಮರಣೀಯ ಸಮಾವೇಶವೆನಿದ್ದು ಸುಳ್ಳಲ್ಲ. ಸಮಾವೇಶದ ಸಂಕ್ಷಿಪ್ತ ನೋಟ ನಿಮಗಾಗಿ, ಇದೋ ಇಲ್ಲಿ!
     ಸಮಯಪಾಲನೆಗೆ ಮಹತ್ವ ನೀಡಿ ಸರಿಯಾಗಿ 10-00 ಘಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಅದಕ್ಕೆ ಮುಂಚೆ ಬಂದಿದ್ದವರೆಲ್ಲರಿಗೆ ರುಚಿರುಚಿಯಾದ ಉಪಹಾರದ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಮನೆತನದ ಅತ್ಯಂತ ಹಿರಿಯ ಸದಸ್ಯರಾದ ಬೆಂಗಳೂರಿನ ಶ್ರೀ ಸಾ.ಕ. ಕೃಷ್ಣಮೂರ್ತಿಯವರನ್ನು ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಗಳ ಸ್ಥಾಪಕ ಮುಖ್ಯಸ್ಥರು, ವಿಶೇಷ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಭೋದನ್ ಸಂಸ್ಥೆಯ ಸಂಯೋಜಕರಾದ ಶ್ರೀ ಸು. ರಾಮಣ್ಣನವರು ಮತ್ತು ಸಮಾವೇಶದ ಆಯೋಜಕ ದಂಪತಿಗಳಾದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿಯವರುಗಳನ್ನು ಆಸೀನಗೊಳಿಸಲಾಯಿತು. ಕುಮಾರಿ ಸ್ಫೂರ್ತಿಆತ್ರೇಯಳ ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭವಾದರೆ, ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ: ಶ್ರೀ/ಶ್ರೀಮತಿ:  ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ, ಸಿ.ಎಸ್.ಕೃಷ್ಣಸ್ವಾಮಿ, ಗಿರಿಜಾಂಬಾ, ಕುಮಾರಸ್ವಾಮಿ
ನಿರೂಪಕಿ: ಬಿಂದು ರಾಘವೇಂದ್ರ
ಸ್ಫೂರ್ತಿಆತ್ರೇಯಳಿಂದ ಗಣೇಶ ಸ್ತುತಿ ನೃತ್ಯ 
  ಕಳೆದ ವರ್ಷ ವಿಧಿವಶರಾದ ಬೆಂಗಳೂರಿನ ಅಡ್ವೋಕೇಟ್ ಶ್ರೀ ಬಿ.ಎನ್. ಲಕ್ಷ್ಮಣರಾವ್, ಹಾಸನ ತಾ. ನಿಟ್ಟೂರಿನ ನಿವೃತ್ತ ಉಪಾಧ್ಯಾಯ ಶ್ರೀ ರಾಮರಾವ್ ಮತ್ತು ಬೀರೂರಿನ ಶ್ರೀಮತಿ ವಿಮಲಮ್ಮಶೇಷಗಿರಿರಾವ್ ಇವರುಗಳ ಆತ್ಮಗಳಿಗೆ ಸದ್ಗತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಸನದ ಶ್ರೀ ಬಿ.ಎನ್. ಸತ್ಯಪ್ರಸಾದರವರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ಮಾಡಿಕೊಡುವುದರೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀ ಬಿ.ಎನ್.ಸತ್ಯಪ್ರಸಾದರಿಂದ ಸ್ವಾಗತ, ಪರಿಚಯ
        'ಕವಿಕಿರಣ' ಪತ್ರಿಕೆಯ ಸಂಪಾದಕ ಶ್ರೀ ಕ.ವೆಂ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾವೇಶಗಳ ಹಿನ್ನೆಲೆ, ಕಾರ್ಯಕ್ರಮಗಳ ಮಹತ್ವ, ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶ, ಕವಿಪ್ರಕಾಶನದ ಪ್ರಕಟಣೆಗಳು, ಇತ್ಯಾದಿ ಸಂಗತಿಗಳ ಕುರಿತು ವಿವರಿಸಿ ಸಾಧನಾಪಥದಲ್ಲಿ ಮುನ್ನಡೆದು ಮನೆತನದ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶ್ರೀ ಕ.ವೆಂ.ನಾಗರಾಜರಿಂದ ಪ್ರಾಸ್ತಾವಿಕ ನುಡಿ

     "ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ" ಎಂಬ ವಿಷಯದಲ್ಲಿ ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ಸಮಾವೇಶದ ಪ್ರಮುಖ ಅಂಗವಾಗಿತ್ತು ಮತ್ತು ಪ್ರಭಾವಿಯಾಗಿತ್ತು. ಒಂದು ಮಾದರಿ ಕುಟುಂಬ ಹೇಗಿರಬೇಕು ಎಂಬ ಬಗ್ಗೆ ಒಂದು ಹಾಡನ್ನು ಹೇಳಿಕೊಟ್ಟು ಎಲ್ಲರಿಂದಲೂ ಹೇಳಿಸುವುದರಿಂದ ಪ್ರಾರಂಭವಾದ ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು, ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಇದು ಒಂದು ವಿಭಿನ್ನ ಕಾರ್ಯಕ್ರಮವೆನಿಸಿದ್ದು, ಈ ಸಂವಾದ ನೀಡಿದ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಸಂವಾದ ನಡೆಸುತ್ತಿರುವ ಶ್ರೀ ಸು.ರಾಮಣ್ಣನವರು
ಇವರುಗಳೂ ಸಂವಾದದಲ್ಲಿ ಭಾಗಿಗಳು
ಶ್ರೀ ಸು.ರಾಮಣ್ಣನವರಿಗೆ ಸನ್ಮಾನ
     ಕವಿಮನೆತನದ ಮೂಲಪುರುಷ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ Keladi Nrupa Vijaya’  ಅನ್ನು ಮುಖ್ಯ ಅತಿಥಿ ಶ್ರೀ ಕೃಷ್ಣಸ್ವಾಮಿಯವರು ಬಿಡುಗಡೆಗೊಳಿಸಿ ಈ ಕೃತಿ ಸಾರಸ್ವತ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು. ಕೃತಿ ಪರಿಚಯವನ್ನು ಸಾಗರದ ಶ್ರೀಮತಿ ಸುಮನಾವೆಂಕಟೇಶ ಜೋಯಿಸ್ ಮಾಡಿಕೊಟ್ಟರು. ಲೇಖಕ ಸುರೇಶರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಸುರೇಶ್ ಮಾತನಾಡಿ ತಮಗೆ ಇದು ಸ್ಮರಣೀಯವಾಗಿದೆಯೆಂದು ತಿಳಿಸಿ, ಈ ಕೃತಿ ತಮ್ಮ ಜೀವಮಾನದಲ್ಲಿ ಮಾಡಿದ ನೆನಪಿಟ್ಟುಕೊಳ್ಳುವ ಕೆಲಸವಾಗಿದೆಯೆಂದರು. ಕವಿಕಿರಣದ ಡಿಸೆಂಬರ್, ೨೦೧೧ ರ ಸಂಚಿಕೆಯನ್ನೂ ಬಿಡುಗಡೆಗೊಳಿಸಿ ಬಂದವರೆಲ್ಲರಿಗೆ ವಿತರಿಸಲಾಯಿತು. ಕ.ವೆಂ.ನಾಗರಾಜರ ಚಿಂತನಶೀಲ ಮುಕ್ತಕಗಳಿರುವ ಪುಸ್ತಕ ಮೂಢ ಉವಾಚದ ಪ್ರತಿಗಳನ್ನೂ ಸಹ ಬಂಧುಗಳಿಗೆ ಉಚಿತವಾಗಿ ನೀಡಲಾಯಿತು.
ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಶ್ರೀಮತಿ ಸುಮನಾ ವೆಂಕಟೇಶಜೋಯಿಸರಿಂದ ಕೃತಿ ಪರಿಚಯ
ಲೇಖಕ ಕವಿಸುರೇಶರ ಮಾತು
ಲೇಖಕರಿಗೆ ಸನ್ಮಾನ
'ಕವಿಕಿರಣ'ದ ಡಿಸೆಂಬರ್ ಸಂಚಿಕೆ ಬಿಡುಗಡೆ
ಮುಖ್ಯ ಅತಿಥಿಗಳ ಮೆಚ್ಚುಗೆಯ ನುಡಿಗಳು
     ಹಿರಿಯರಾದ ಬೆಂಗಳೂರಿನ ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾವ್, ಶಿವಮೊಗ್ಗದ ಶ್ರೀಮತಿ ಸೀತಾಲಕ್ಷ್ಮಮ್ಮಕೃಷ್ಣಮೂರ್ತಿ ಮತ್ತು ಕೆಳದಿಯ ಶ್ರೀ ಗುಂಡಾಜೋಯಿಸರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಗುಂಡಾಜೋಯಿಸರು ಹೊರಗಿನವರ ಸನ್ಮಾನಕ್ಕಿಂತ ಬಂಧುಗಳು ಮಾಡಿದ ಸನ್ಮಾನ ತಮಗೆ ತುಂಬಾ ಸಂತೋಷ ನೀಡಿದೆಯೆಂದು ಕೃತಜ್ಞತೆ ಅರ್ಪಿಸಿದರು. ಶ್ರೀ ಕುಮಾರಸ್ವಾಮಿಯವರು ಮಾತನಾಡುತ್ತಾ ಭಾವುಕರಾಗಿದ್ದು ಸಮಾವೇಶದ ಯಶಸ್ಸು ಬಿಂಬಿಸಿತ್ತು. ಆಯೋಜಕರು, ಸಮಾವೇಶಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾಯರನ್ನು ಸನ್ಮಾನಿಸಿದಾಗ ಸಂಭ್ರಮಿಸಿದ ಬಂಧುಗಳು
ಶ್ರೀಮತಿ ಸೀತಾಲಕ್ಷ್ಮಮ್ಮ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದಾಗ
ಶ್ರೀ ಕೆಳದಿ ಗುಂಡಾಜೋಯಿಸರನ್ನು ಸನ್ಮಾನಿಸಿದಾಗ ಹಿಗ್ಗಿದ ಕುಟುಂಬವರ್ಗ
ಸಮಾವೇಶದ ಅಯೋಜಕರ ಬಂಧುವರ್ಗದ ಸಂಭ್ರಮ
ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳಿಗೆ ಅಭಿನಂದನೆ
ಸಹಕಾರಿ ಶ್ರೀ ಪಾಂಡುರಂಗ, ಹಾಸನ ಇವರಿಗೆ ಅಭಿನಂದನೆ
     ಇದೇ ಸಂದರ್ಭದಲ್ಲಿ ಒಂದು ಪ್ರದರ್ಶಿನಿ ಏರ್ಪಡಿಸಿದ್ದು ಇದರಲ್ಲಿ ಕವಿಮನೆತನದವರು ರಚಿಸಿದ ಕಲಾಕೃತಿಗಳು, ವರ್ಣಚಿತ್ರಗಳು, ಪುಸ್ತಕಗಳು, ಭಾವಚಿತ್ರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗಿದ್ದು ಇದು ಇತರರಿಗೂ ಸಹ ಏನನ್ನಾದರೂ ಮಾಡಲು ಪ್ರೇರೇಪಿಸಲು ಸಹಕಾರಿಯಾಯಿತು ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಚಿತ್ರಗಳನ್ನು ಪ್ಲೈವುಡ್ ಮೇಲೆ ಅಂಟಿಸಿ ಕಲಾರಚನೆಗೆ ಅನುಗುಣವಾಗಿ ಕತ್ತರಿಸಿ ಸಿದ್ಧಪಡಿಸಿದ ಕೃತಿಗಳು ಗಮನ ಸೆಳೆದವು.
 ಪ್ರದರ್ಶಿನಿಯ ಕೆಲವು ದೃಷ್ಯಗಳು


     ಬೆಂಗಳೂರಿನ ಶ್ರೀಮತಿ ಸುಮಾರಾಜೇಶ್, ಕುಮಾರಿಯರಾದ ಸ್ಫೂರ್ತಿಆತ್ರೇಯ ಮತ್ತು ಲಕ್ಷ್ಮಿಶ್ರೀಭಾರದ್ವಾಜರವರುಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಕಲಾರಸಿಕರಿಗೆ ಮನದಣಿಸುವಲ್ಲಿ ಯಶಸ್ವಿಯಾಯಿತು. ಶ್ರೀಮತಿ ಸುಮಾರಾಜೇಶರು ಬೆಂಗಳೂರಿನಲ್ಲಿ ಸ್ಫೂರ್ತಿ ನಾಟ್ಯಶಾಲೆ ನಡೆಸುತ್ತಿದ್ದು ಹೆಸರಾಂತ ಕಲಾವಿದೆಯಾಗಿದ್ದಾರೆ. ಕುಮಾರಿ ಪಲ್ಲವಿ ಸತ್ಯಪ್ರಸಾದರ ಹಾಡುಗಾರಿಕೆ ಕೇಳುಗರಿಗೆ ಹಿತವಾದ ಅನುಭವ ನೀಡಿತು. ಪುಟಾಣಿ ಅಕ್ಷಯಳ ಏಕಪಾತ್ರಾಭಿನಯ. ಅನಘನ ಭಗವದ್ಗೀತಾ ಪಠಣ, ಕು. ಕವನ ಸಂಗಡಿಗರಿಂದ ಡ್ಯಾನ್ಸ್, ಶ್ರೀ ಲಕ್ಷ್ಮೀಶರ ಹಾಡು, ಡಾ. ಬಿ.ಎಸ್.ಆರ್. ದೀಪಕ್‌ರ ಸಂಗೀತ, ಅನೇಕ ಬಂಧುಗಳು, ವಿಶೇಷವಾಗಿ ಪುಟಾಣಿಗಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು. ಶ್ರೀಮತಿ ಬಿಂದುರಾಘವೇಂದ್ರರವರ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಭೋಜನಾನಂತರ ಸಹ ಮನರಂಜನೆ ಕಾರ್ಯಕ್ರಮಗಳು ಮುಂದುವರೆದವು. ವಂದನೆ, ಅಭಿನಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಾಗ ಎಲ್ಲರೂ ಸ್ಮರಣೀಯ ನೆನಪುಗಳೊಂದಿಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರೆ ಸಮಾವೇಶಕ್ಕಾಗಿ ಶ್ರಮಿಸಿದವರಲ್ಲಿ ಸಮಾವೇಶ ಸಫಲಗೊಂಡ ಬಗ್ಗೆ ಸಾರ್ಥಕಭಾವ ಮೂಡಿತ್ತು.
ಸ್ಫೂರ್ತಿ ಆತ್ರೇಯ
 ಸುಮಾ ರಾಜೇಶ್


ಲಕ್ಷ್ಮಿಶ್ರೀ ಭಾರದ್ವಾಜ್
ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಳು
ಅಕ್ಷಯ, ಓರ್ವ  ಪುಟಾಣಿ, ಅನಘ, ಡಾ. ದೀಪಕ್.
ಅಂಬಿಕಾ, ಗೋಪಾಲಕೃಷ್ಣ, ಅಕ್ಷಯ, ಲಕ್ಷ್ಮೀಶ



ಇವರುಗಳೇ ಸಕ್ರಿಯರಾಗಿ ಪಾಲುಗೊಂಡು ಸಮಾವೇಶವನ್ನು ಸಾರ್ಥಕಗೊಳಿಸಿದವರು
************
ಸಮಾವೇಶಕ್ಕೆ ಸಂಬಂಧಿಸಿದ ಇನ್ನಷ್ಟು ಚಿತ್ರಗಳು




ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಲೇಖಕ ಕವಿಸುರೇಶರಿಗೆ ಸನ್ಮಾನ
ಸನ್ಮಾನಿತರ ಪರವಾಗಿ ಶ್ರೀ ಕೆಳದಿ ಗುಂಡಾಜೋಯಿಸರ ಅನಿಸಿಕೆ
ಸಹಕಾರಿ ಶ್ರೀ ಪಾಂಡುರಂಗರವರಿಗೆ ಅಭಿನಂದನೆ


ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳನ್ನು ಅಭಿನಂದಿಸಿದಾಗ



    

Monday, January 2, 2012

ಕೆಳದಿ ಕವಿ ಮನೆತನದ ವಾರ್ಷಿಕ ಸಮಾವೇಶ-6 : ಹಾಸನ

ದಿನಾಂಕ 25.12.11 ರಂದು ಹಾಸನದಲ್ಲಿ ನಡೆದ ಕವಿ ಮನೆತನದವರ ಮತ್ತು ಬಂಧುಗಳ ವಾರ್ಷಿಕ ಸಮಾವೇಶದ ವಿಚಾರವಾಗಿ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ  ತುಣುಕು ಮಾಹಿತಿಗಾಗಿ:


Sunday, December 4, 2011

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ


ನೀವು ಆಹ್ವಾನಿತರು, ಅಪೇಕ್ಷಿತರು - ಬನ್ನಿ, ಕ್ರಿಯಾತ್ಮಕವಾಗಿ ಪಾಲುಗೊಳ್ಳಿ

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ
ದಿನಾಂಕ 25-12-2011ರ ಭಾನುವಾರ
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯದ ಆವರಣ, ರವೀಂದ್ರನಗರ, ಹಾಸನ

                    ಕಾರ್ಯಕ್ರಮ:
ಸಂವಾದ:            ವಿಷಯ: 'ನಮ್ಮ ಕುಟುಂಬ-ನಾವು-ನಮ್ಮವರು'
ನಡೆಸಿಕೊಡುವವರು:               ಮಾನ್ಯ ಶ್ರೀ ಸು.ರಾಮಣ್ಣ,
                                    ಸಂಯೋಜಕರು, ಕುಟುಂಬ ಪ್ರಭೋದನ್, ರಾ.ಸ್ವ.ಸಂಘದ ಹಿರಿಯ ಪ್ರಚಾರಕರು, ಹುಬ್ಬಳ್ಳಿ

ಸನ್ಮಾನ:                     ಕವಿಮನೆತನದವರಿಂದ
                              ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು
                              ಶ್ರೀ ಕೆಳದಿ ಗುಂಡಾಜೋಯಿಸರು ಇವರುಗಳಿಗೆ

ಅರ್ಪಣೆ:                    ಕವಿ ಸುರೇಶ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಿದ ಕೃತಿ: 'ಕೆಳದಿ ನೃಪವಿಜಯ'
                                                  ಕವಿಕಿರಣದ ಡಿಸೆಂಬರ್ ಸಂಚಿಕೆ

ಸಾಂಸ್ಕೃತಿಕ ಕಾರ್ಯಕ್ರಮಗಳು:         
ಭರತನಾಟ್ಯ: 
                    ಸುಮಾರಾಜೇಶ್, ಸ್ಫೂರ್ತಿಆತ್ರೇಯ, ಲಕ್ಷ್ಮಿಶ್ರೀಭಾರದ್ವಾಜ್
 ಹಾಡುಗಾರಿಕೆ:                                 ಪಲ್ಲವಿ ಎಸ್.ಪ್ರಸಾದ್
ಏಕಪಾತ್ರಾಭಿನಯ, ಮಿಮಿಕ್ರಿ ಸೇರಿದಂತೆ ವಿವಿಧ ಮನರಂಜಿಸುವ ಕಾರ್ಯಕ್ರಮಗಳು
ಕವಿಕುಟುಂಬಗಳ ಹಾಗೂ ಬಂಧು-ಬಳಗದವರ ಎಲ್ಲಾ ಸದಸ್ಯರುಗಳು ಭಾಗವಹಿಸುವುದು ಅಪೇಕ್ಷಣೀಯ; ಸಾಧ್ಯವಾಗದಿದ್ದಲ್ಲಿ ಪ್ರತಿ ಕುಟುಂಬದ ಒಬ್ಬರಾದರೂ ಪ್ರತಿನಿಧಿಸಲು ವಿನಂತಿಯಿದೆ.
ದಿ. ಜಯಲಕ್ಷ್ಮಮ್ಮ ಕಾಶಿ ಗಣೇಶ ದೀಕ್ಷಿತರ ನೆನಪಿನಲ್ಲಿ
ಆತ್ಮೀಯ ಸ್ವಾಗತ ಕೋರುವ,
ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಬಿ.ಎನ್.ಕುಮಾರಸ್ವಾಮಿ ಕುಟುಂಬ ವರ್ಗದವರು
ಸಮಾವೇಶದ ಆಯೋಜಕರು
-೦-೦-೦-೦-೦-೦-೦-೦-೦-೦-೦-೦-೦-೦-೦-

ಗಮನಕ್ಕೆ:
1.ಕಾರ್ಯಕ್ರಮ ಬೆ. 10-00ಕ್ಕೆ ಸರಿಯಾಗಿ ಪ್ರಾರಂಭಿಸುವ ಉದ್ದೇಶವಿದ್ದು ಎಲ್ಲರೂ ಸಭಾಂಗಣದಲ್ಲಿ ಹತ್ತು ನಿಮಿಷ ಮುಂಚೆ ಆಸೀನರಾಗಲು ವಿನಂತಿ. ಬೆಳಿಗ್ಗೆ 10-00ರವರೆಗೆ ಉಪಾಹಾರದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನದ ಭೋಜನಾನಂತರವೂ ಕಾರ್ಯಕ್ರಮ ಮುಂದುವರೆಯಲಿದೆ.
2.ವಸ್ತುಪ್ರದರ್ಶನದ ವ್ಯವಸ್ಥೆ ಇರುತ್ತದೆ. ಪ್ರದರ್ಶಿಸಬಹುದಾದ ಅಮೂಲ್ಯ ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು, ವಸ್ತುಗಳು, ಇತ್ಯಾದಿ ಇದ್ದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಬರುವಾಗ ತರಬಹುದು.
3.ಸಮಾವೇಶಕ್ಕೆ ಬರುವವರ ಸಂಖ್ಯೆ ಕುರಿತು ಮುಂಚಿತವಾಗಿ ತಿಳಿಸಿದರೆ ಸಹಕಾರಿಯಾಗುವುದು. 
ಸಂಪರ್ಕಿಸಬಹುದಾದ ಸಂ: 
9448501804 (ಕ.ವೆಂ.ನಾಗರಾಜ್),
9448932866 (ಕವಿ ಸುರೇಶ್),
9844226477 (ಬಿ.ಎನ್.ಕುಮಾರಸ್ವಾಮಿ).

ಮನವಿ: ಇ-ಮೇಲ್ ವಿಳಾಸವಿಲ್ಲದಿರುವ ನಿಮ್ಮ ಕುಟುಂಬದ ಹಾಗೂ ಬಂಧುಗಳಿಗೂ ವಿವರ ತಿಳಿಸಿ, ಆಹ್ವಾನಿಸಿ.

Tuesday, November 15, 2011

ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ


ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ
     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ೫ನೆಯ ವಾರ್ಷಿಕ ಸಮಾವೇಶದ ಆಯೋಜಕರಾಗಿ ಕವಿ ಸುರೇಶರ ಸಲಹೆ, ಸೂಚನೆಗಳನ್ನು ಪಡೆದು ಉತ್ತಮ ವ್ಯವಸ್ಥೆ ಮಾಡಿದ್ದರು. ಕವಿ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಯುವಪೀಳಿಗೆ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ವಿಚಾರ ಮಂಡಿಸಿದವರು ಕವಿನಾಗರಾಜ್. ಇಂತಹ ಕಾರ್ಯಕ್ರಮ ಅನುಕರಣೀಯವೆಂದವರು ಮುಖ್ಯ ಅತಿಥಿ ಶ್ರೀ ಹರಿಹರಪುರ ಶ್ರೀಧರ್. ವಯೋವೃದ್ಧರೂ, ಮಾರ್ಗದರ್ಶಿಗಳಾದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಸಮಾರಂಭದಲ್ಲಿ ಹಾಜರಾಗಿ ಕುಟುಂಬ ಮಿಲನದ ಮಹತ್ವ  ತಿಳಿಸಿದವರು ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಶ್ರೀ ಪದ್ಮನಾಭ ಭಟ್ಟರು. ಆಶುಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಆಯೋಜಕರಿಗೆ ಅಭಿನಂದನೆ, ವಂದನಾರ್ಪಣೆಗಳೊಂದಿಗೆ ಸಮಾವೇಶ ಸಂಪನ್ನಗೊಂಡಿತು. ಕೆಲವು ಚಿತ್ರಗಳು ತಮ್ಮ ಮಾಹಿತಿಗೆ:












     ೬ನೆಯ ವಾರ್ಷಿಕ ಸಮಾವೇಶ ದಿನಾಂಕ ೨೫-೧೨-೨೦೧೧ರಂದು ಹಾಸನದಲ್ಲಿ ನಡೆಯಲಿದೆ. ಕವಿಮನೆತನದ ಎಲ್ಲಾ ಕುಟುಂಬಗಳ ಎಲ್ಲಾ ಸದಸ್ಯರುಗಳು, ಬಂಧುಗಳು, ಹಿತೈಷಿಗಳು ತಪ್ಪದೆ ಕ್ರಿಯಾತ್ಮಕವಾಗಿ ಪಾಲುಗೊಂಡು ಸಮರಸತೆಯ ಕೊಂಡಿಗಳನ್ನು ಭದ್ರಪಡಿಸಲು ಕೋರಲಾಗಿದೆ.
*******************
ಹಿಂದಿನ ಲೇಖನಕ್ಕೆ ಲಿಂಕ್: ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ : http://kavimana.blogspot.com/2011/11/blog-post_05.html

Saturday, November 5, 2011

ದಿ.ಎಸ್.ಕೆ. ನಾರಾಯಣರಾಯರ ನೆನಪು

     ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.  (ನಮ್ಮ ಮುತ್ತ ಜ್ಜ  ಕವಿವೆಂಕಣ್ಣಯ್ಯನವರ ತಮ್ಮ ಸಾ.ಕ.ಲಿಂಗಣ್ಣಯ್ಯನವರ ಹಿರಿಯ ಮಗ). ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಅವರ ಮೊಮ್ಮಗ ಬೆಂಗಳೂರಿನ ಶ್ರೀ ಸತೀಶಕುಮಾರ್ ಕಳಿಸಿಕೊಟ್ಟಿರುವ ಅಪರೂಪದ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದೆ. ಶ್ರೀ ನಾರಾಯಣರಾಯರ ಕುರಿತು ಲೇಖನ ಮುಂದಿನ 'ಕವಿಕಿರಣ' ಸಂಚಿಕೆಯಲ್ಲಿ ಪ್ರಕಟವಾಗಲಿದೆ. 
ಪತ್ನಿ ದಿ. ಶ್ರೀಮತಿ ವರಲಕ್ಷ್ಮಮ್ಮನವರೊಂದಿಗೆ



Monday, October 17, 2011

KELADI NRUPA VIJAYA


‘PɼÀ¢ £ÀÈ¥À «dAiÀÄ’
       PɼÀ¢ PÀ« ªÀÄ£ÉvÀ£ÀzÀ ªÀÄÆ®ಪುgÀĵÀgÁzÀ PɼÀ¢ D¸ÁÜ£À PÀ«UÀ¼ÁVzÀÝ PÀ« °AUÀtÚAiÀÄå£ÀªÀgÀÄ gÀa¹zÀ C£ÀÄ¥ÀªÀÄ PÀÈw ‘PɼÀ¢ £ÀÈ¥À «dAiÀÄ’. EzÉÆAzÀÄ ZÀA¥ÀÆ PÁªÀå. EwºÁ¸À, ¸Á»vÀå, ¯Á°vÀå ªÀÄvÀÄÛ PÀ« PÀ®à£ÉUÀ¼À£É߯Áè MAzÀgÀ¯Éèà ªÉÄÊzÀÄA©¹PÉÆArgÀĪÀ ªÀĺÀvÀÛgÀ PÀÈw. PɼÀ¢ UÀÄAqÁ eÉÆ¬Ä¸ÀgÀÄ EzÀgÀ PÀ£ÀßqÀ UÀzÁå£ÀĪÁzÀªÀ£ÀÄß 1976gÀ°è ªÀiÁrzÀÝgÀÄ. D PÀ£ÀßqÀ UÀzÁå£ÀĪÁzÀªÀ£ÀÄß DAUÀè¨sÁµÉUÉ ¨sÁµÁAvÀj¸ÀĪÀ ¸ÀzÀªÀPÁ±À £À£ÀUÉ §AzÀzÀÄÝ 2010-11 gÀ°è. J®èQÌAvÀ £À£Àß PÀÄ®zÀ ªÀÄÆ®¥ÀÄgÀĵÀgÀÄ (PÀ« °AUÀtÚAiÀÄå) §gÉzÀAvÀºÀ PÀÈwAiÀÄ£ÀÄß (¸ÀĪÀiÁgÀÄ 1750gÀ°è) CªÀgÀ 10£Éà vÀ¯ÉªÀiÁj£ÀªÀ£ÁzÀ £Á£ÀÄ DAUÀè¨sÁµÉUÉ ¨sÁµÁAvÀj¸ÀĪÀAvÀºÀ ¸ÀĸÀAzÀ¨sÀð MzÀV §AzÀzÀÄÝ £À£Àß ¨sÁUÀå. £À£ÀUÉ CvÀåAvÀ vÀÈ¦Û PÉÆlÖ ¸ÀuÁÚw¸ÀtÚ ¸ÁzsÀ£ÉUÀ¼À°è EzÀÆ MAzÀÄ ¥ÀæªÀÄÄRªÁzÀÄzÀÄ. EzÀPÁÌV PɼÀ¢ UÀÄAqÁeÉÆ¬Ä¸ÀjUÉ ªÀÄvÀÄÛ ¥ÀæPÀn¹zÀ ¨sÁgÀvÀ ¸ÀPÁðgÀPÉÌ (PɼÀ¢ ºÀ¸ÀÛ¥Àæw ¸ÀA¥À£ÀÆä® PÉÃAzÀæzÀ ªÀÄÆ®PÀ) £Á£ÀÄ D¨sÁj. EzÀgÀ §UÉÎ £À£ÀßtÚ£À (PÀ« £ÁUÀgÁdgÀ) F D²ÃªÀðZÀ£ÀUÀ¼Éà ¸ÀéAiÀÄA-ªÉÃzÀå:

‘PɼÀ¢£ÀÈ¥À «dAiÀÄ’ PÀÈwAiÀÄ EAVèµï UÀzÁå£ÀĪÁzÀ MAzÀÄ CªÀÄÆ®å PÉÆqÀÄUÉ

    “15£ÉAiÀÄ ±ÀvÀªÀiÁ£ÀzÀ°è GzÀ¬Ä¹ ¸ÀĪÀiÁgÀÄ 250 ªÀµÀðUÀ¼À PÁ® ¨Á½zÀ §°µÀ× PɼÀ¢ ¸ÀA¸ÁÜ£À PÀ£ÁðlPÀzÀ ºÉªÉÄäAiÀÄ ¥ÀæzsÁ£À gÁd¸ÀvÉÛAiÀiÁVzÀÄÝ, ªÉʨsÀªÀzÀ ¹ÜwAiÀÄ°è ªÉÄʸÀÆgÀÄ ¸ÀA¸ÁÜ£ÀQÌAvÀ®Æ C¢üPÀ ¨sËUÉÆÃ°PÀ «¸ÁÛgÀ ºÉÆA¢zÁÝVvÀÄÛ. »AzÀÆ ¸ÀA¸ÀÌøw ªÀÄvÀÄÛ vÀvÀéUÀ¼À gÀPÀëuÉAiÀİè F ¸ÀA¸ÁÜ£À ¥ÀæªÀÄÄR ¥ÁvÀæ ªÀ»¹vÀÄÛ. F gÁd¸ÀvÉÛAiÀİè D½zÀ CgÀ¸ÀgÀÄUÀ¼À ZÀjvÉæAiÀÄ£ÀÄß «ªÀj¸ÀĪÀ PÀÈwAiÉÄà ‘PɼÀ¢£ÀÈ¥À «dAiÀÄ’. PɼÀ¢ ¸ÀA¸ÁÜ£ÀzÀ°è D¸ÁÜ£ÀPÀ«AiÀiÁVzÀÝ PÀ« °AUÀtÚ£À F PÀÈw PɼÀ¢AiÀÄgÀ¸ÀgÀ fêÀ£À ZÀjvÉæAiÀÄ£ÀÄß AiÀÄxÁªÀvÁÛV w½¸ÀĪÀ ZÀA¥ÀÆUÀæAxÀªÁVzÀÄÝ LwºÁ¹PÀ ªÀĺÀvÀéªÀżÀîzÁÝVzÉ. EwºÁ¸ÀªÀ£ÀÄß ªÀÄÄA¢£À ¦Ã½UÉUÉ ¥ÀjZÀ¬Ä¸ÀĪÀ ºÁUÀÆ EwºÁ¸Á¸ÀPÀÛjUÉ ªÀĺÀvÀézÀ DPÀgÀ UÀæAxÀªÁVgÀĪÀ EzÀ£ÀÄß gÀa¹zÀ 17£ÉAiÀÄ ±ÀvÀªÀiÁ£ÀzÀ PÀ«°AUÀtÚ¤AzÁVAiÉÄà EªÀ£À £ÀAvÀgÀzÀªÀgÀÄ PÀ«ªÀÄ£ÉvÀ£ÀzÀªÀgÉA§ ºÉ¸ÀgÀÄ ¥ÀqÉzÀgÀÄ JA§ÄzÀÄ UÀªÀÄ£ÁºÀð.  12 D±Áé¸ÀUÀ¼ÀļÀî F PÀÈw PɼÀ¢ gÁdgÀÄUÀ¼À ¥ÀÆtð ¥ÀjZÀAiÀÄ ªÀiÁrPÉÆqÀĪÀ°è PÀ«AiÀÄÄ AiÀıÀ¹éAiÀiÁVzÀÄÝ, eÉÆvÉeÉÆvÉUÉ avÀæzÀÄUÀðzÀ £ÁAiÀÄPÀgÀÄ, ¨ÉîÆgÀ £ÁAiÀÄPÀgÀÄ, «dAiÀÄ£ÀUÀgÀzÀ ZÀPÀæªÀwðUÀ¼ÀÄ, µÁ» gÁdgÀÄ, ªÉÄʸÀÆgÀÄ MqÉAiÀÄgÀÄ, vÀjPÉgÉAiÀÄ £ÁAiÀÄPÀgÀÄ, zɺÀ°AiÀÄ ¨ÁzÀµÀºÀgÀÄ, CºÀªÀÄzï £ÀUÀgÀzÀ ¤eÁAµÀºÀ£Éà ªÀÄÄAvÁzÀªÀgÀÄ, ©eÁ¥ÀÄgÀzÀªÀgÀÄ, ¸ÉÆÃzÉ, UÉÃgÀďɯ¥Àà, ©¼ÀV EvÁå¢ CgÀ¸ÀgÀ ZÀjvÉæUÀ¼ÀÄ, ²æÃ ±ÀÈAUÉÃj ªÀÄoÀzÀ ¥ÀgÀA¥ÀgÉAiÀÄ UÀÄgÀÄUÀ¼ÀÄ ªÀÄÄAvÁzÀ ZÀjvÉæUÀ¼À£ÀÄß ¥Áæ¸ÀAVPÀªÁV «ªÀj¹zÁÝ£É. PÀÈwAiÀÄ 7£Éà D±Áé¸ÀzÀ 15£ÉAiÀÄ ¥ÀzÀåªÀ£ÀÄß ¸ÁAPÉÃwPÀªÁV  E°è GzÁºÀj¸ÀĪÀÅzÀÄ GavÀªÁ¢ÃvÀÄ:
  ZÀA||ªÀiÁ||   PÀqÀÄV zÀÄgÁ¸É¬ÄA ¥ÀæeÉUÀ¼ÀA £ÉgÉ£ÉÆÃ¬Ä¸ÀzÁ £ÀÈ¥ÁxÀðªÀÄA
              ©qÀzÉ vÀ¢ÃAiÀÄ ¸ËªÀÄå¸ÀÄ¥ÀzÁxÀðUÀ¼ÀA ®ªÀªÀiÁvÀæªÀiÁzÉÆqÀA
              ¥ÉÆqÀ«AiÀÄ£ÉÊzÉ ¥Á¼ÉÎqÀ°ÃAiÀÄzÉ §°érzÀAPÉgÀhÄAPɬÄA
              £ÀqɬĥÀ¤AvÀÄ £Ár£À¢üPÁgÀªÀ£ÉüÉÎUÉ vÀAzÀ£ÀÄ«ðAiÀÄA

     F ¥ÀzÀåªÀÅ ‘zÀÄgÁ¸É¬ÄAzÀ ¥ÀæeÉUÀ¼À£ÀÄß £ÉÆÃ¬Ä¸ÀzÉ, ºÁUÉAiÉÄà §gÀ¨ÉÃPÁzÀ gÁd¸ÀéªÀ£ÀÆß ©lÄÖPÉÆqÀzÉ, ¨sÀÆ«ÄAiÀÄ£ÀÄß ¥Á¼ÀÄUÉqÀªÀ®Ä ©qÀzÉ, PÀlÄÖ¥ÁqÀÄUÀ¼À£ÀÄß «¢ü¹, ¸ÀÆPÀÛ PÀmÁÖeÉÕUÀ¼À£ÀÄß ªÀiÁqÀÄvÁÛ gÁdåªÀ£ÀÄß C©üªÀÈ¢ÞUÉÆ½¹zÀ’ ²¹Û£À ²ªÀ¥Àà£ÁAiÀÄPÀ£ÉAzÉà ºÉ¸ÀgÁzÀ ²ªÀ¥Àà£ÁAiÀÄPÀ£À D½éPÉAiÀÄ PÁ®zÀ ¹ÜwAiÀÄ ¥ÀjZÀAiÀÄ ªÀiÁr¸ÀÄvÀÛzÉ.

     17£ÉAiÀÄ ±ÀvÀªÀiÁ£ÀzÀ°è ¥ÀæZÀ°vÀ«zÀÝ PÁªÀå£ÀªÀÄÆ£ÉAiÀİè gÀavÀªÁVgÀĪÀ F PÀÈw d£À¸ÁªÀiÁ£ÀåjUÀÆ vÀ®Ä¥À¨ÉÃPÀÄ ªÀÄvÀÄÛ EwºÁ¸Á¸ÀPÀÛjUÀÆ G¥ÀAiÉÆÃUÀªÁUÀ¨ÉÃPÀÄ JA§ zÀȶ֬ÄAzÀ PɼÀ¢AiÀÄ ²æÃ UÀÄAqÁeÉÆÃ¬Ä¸ÀgÀÄ PÀ£ÀßqÀ ¸ÀgÀ¼À UÀzÀågÀÆ¥ÀzÀ°è ¹zÀÞ¥Àr¹zÀÄÝ EzÀ£ÀÄß PÀ£ÀßqÀ ¸Á»vÀå ¥ÀjµÀvÀÄÛ ªÉÆzÀ® ¸À® 1976gÀ°è ªÀÄvÀÄÛ £ÀAvÀgÀ 1999gÀ°è JgÀqÀÄ ¸À® ªÀÄÄ¢æ¹ ¥ÀæPÀn¹zÉ. ²æÃ UÀÄAqÁeÉÆÃ¬Ä¸ÀgÀÄ PɼÀ¢AiÀÄ gÁd¥ÀÄgÉÆÃ»vÀgÀ ªÀA±À¸ÀÜgÁVzÀÄÝ, PɼÀ¢AiÀÄ EwºÁ¸À UÀÄgÀÄw¸ÀĪÀ ªÀÄvÀÄÛ ¥ÁæªÀÄÄRåvÉAiÀÄ£ÀÄß Cj«UÉ vÀgÀĪÀ ªÀĺÀvÀézÀ PɼÀ¢ ªÀÄÆå¹AiÀĪÀiï ¸ÁÜ¥ÀPÀgÁVzÀÄÝ, 1960gÀ°è ¸Áܦ¹zÀÝ F ªÀÄÆå¹AiÀĪÀiï C£ÀÄß 2008gÀ°è PÀĪÉA¥ÀÄ «±Àé«zÁå®AiÀÄPÉÌ ªÀÄÄPÀÛªÁV ºÀ¸ÁÛAvÀj¹zÀÄÝ ±ÁèWÀ¤ÃAiÀÄ PÁAiÀÄðªÁVzÉ. EwÛÃZÉUÉ £ÀqÉzÀ ¸ÁUÀgÀ vÁ®ÆèPÀÄ PÀ£ÀßqÀ ¸Á»vÀå ¸ÀªÉÄäüÀ£ÁzsÀåPÀëgÁVzÀÝ EªÀgÀÄ E½ªÀAiÀĹì£À®Æè ZÉÊvÀ£ÀåzÀ a®ÄªÉÄAiÀiÁVzÁÝgÉ. F UÀzÁå£ÀĪÁzÀ¢AzÀ PÀ«°AUÀtÚ£À PÀÈw ºÉZÀÄÑ ºÉZÀÄÑ d£ÀjUÉ vÀ®Ä¥ÀĪÀAvÉ ªÀiÁrzÀ QÃwð UÀÄAqÁeÉÆÃ¬Ä¸ÀjUÉ vÀ®Ä¥ÀÄvÀÛzÉ. EzÀ£ÀÄß ‘PÀ«QgÀt’zÀ°è zsÁgÁªÁ»AiÀiÁV ¥ÀæPÀn¸À¯ÁUÀÄwÛzÉ.
      F PÀÈw PÀ£ÀßrUÀjUÉ ªÀiÁvÀæªÀ®èzÉ PÀ£ÀßqÉÃvÀgÀjUÀÆ ¥ÀjZÀAiÀĪÁUÀ¨ÉÃPÉA§ GzÉÝñÀ¢AzÀ ¸ÀºÉÆÃzÀgÀ PÀ«¸ÀÄgÉñï PÀÈwAiÀÄ EAVèµï UÀzÁå£ÀĪÁzÀªÀ£ÀÄß ªÀiÁr ¸ÁgÀ¸ÀévÀ¯ÉÆÃPÀPÉÌ MAzÀÄ CªÀÄÆ®å PÉÆqÀÄUÉ ¤ÃrzÁÝgÉ. PÀ£ÁðlPÀ ¸ÀaªÁ®AiÀÄzÀ°è ¸ÉPÀë£ï C¢üPÁjAiÀiÁVzÀÄÝ PÉ®ªÀÅ ªÀµÀðUÀ¼À »AzÉ ¸Àé EZÁÒ ¤ªÀÈwÛ ºÉÆA¢ ²ªÀªÉÆUÀÎzÀ°è £É¯É¹gÀĪÀ EªÀgÀÄ §gÀªÀtÂUÉAiÀÄ°è ¸ÀQæAiÀÄgÁV vÉÆqÀVPÉÆArzÀÄÝ, PɼÀ¢ PÀ«ªÀÄ£ÉvÀ£ÀzÀªÀgÀ£ÀÄß ¥ÀjZÀ¬Ä¸ÀĪÀ ‘ºÀ¼Éà ¨ÉÃgÀÄ - ºÉƸÀ aUÀÄgÀÄ’, PÀ«ªÀÄ£ÉvÀ£ÀzÀ CzÀÄãvÀ ¥Àæw¨sÉ J¸ï.PÉ. °AUÀtÚAiÀÄå (°AUÀtÚ PÀ«AiÀÄ ªÀA±À¸ÀÜgÀÄ)£ÀªÀgÀ fêÀ£À ZÀjvÉæ (EAVèµï£À°è)Karmayogi – Kalavallabha S.K. LINGANNAIYA’, ªÀåQÛvÀé «PÀ¸À£À PÀÄjvÀ ¯ÉÃR£ÀUÀ¼À ¸ÀAUÀæºÀ ‘GvÀÌøµÀÖzÉqÉUÉ’, qÁ. ªÉAPÀmÉñÀ eÉÆÃ¬Ä¸ï gÀa¹zÀ ‘ªÀÄgÉAiÀįÁUÀzÀ PɼÀ¢ ¸ÁªÀiÁædå’ ¥ÀĸÀÛPÀzÀ EAVèµï C£ÀĪÁzÀ ‘Unforgettable Keladi Empire’ ªÀÄvÀÄÛ  PÀÆrè dUÀ£ÁßxÀ ±Á¹ÛçAiÀĪÀgÀ PÀÈw ‘PÀÆrè PÉëÃvÀæzÀ ¥ÀjZÀAiÀÄ’ªÀ£ÀÆß EAVèµï ¨sÁµÉUÉ vÀdÄðªÉÄ ªÀiÁrzÁÝgÉ. PÀ«°AUÀtÚ£À £ÀAvÀgÀzÀ PɼÀ¢ PÀ«ªÀÄ£ÉvÀ£ÀzÀ 9£ÉAiÀÄ ¦Ã½UÉUÉ ¸ÉÃjzÀ PÀ«¸ÀÄgÉÃ±ï ªÀiÁrgÀĪÀ ‘PɼÀ¢£ÀÈ¥À «dAiÀÄ’zÀ EAVèµï UÀzÁå£ÀĪÁzÀ ZÉ£ÁßVzÉ, N¢¹PÉÆAqÀÄ ºÉÆÃUÀÄvÀÛzÉ. ²æÃ UÀÄAqÁeÉÆÃ¬Ä¸ÀgÀÄ ¥Àæw ¥ÀzÀåzÀ PÀ£ÀßqÀ UÀzÁå£ÀĪÁzÀ ªÀiÁrzÀÝgÉ F EAVèµï UÀzÁå£ÀĪÁzÀzÀ°è CzsÁåAiÀĪÁgÀÄ ªÀiÁqÀ¯ÁVzÉ. ¥ÀzÀåªÁgÀÄ C£ÀĪÁzÀ ªÀiÁrzÀgÉ vÀÄAqÀÄ vÀÄAqÁUÀĪÀÅzÀjAzÀ PÀÈwAiÀÄ£ÀÄß CjAiÀÄĪÀ°è vÉÆqÀPÁUÀ§ºÀÄzÉAzÀÄ »ÃUÉ ªÀiÁrgÀÄvÁÛgÉ. DzÀgÉ ªÀÄÆ¯ÁxÀðPÉÌ ªÀåvÀåAiÀĪÁUÀzÀAvÉ £ÉÆÃrPÉÆAqÀÄ C£ÀĪÁ¢¹gÀĪÀÅzÀÄ ¯ÉÃRPÀgÀ ¸ÁzsÀ£ÉAiÉÄà ¸Àj. PÀgÀqÀÄ gÀÆ¥ÀzÀ°èzÁÝUÀ F PÀÈwAiÀÄ£ÀÄß £Á£ÀÄ ¥ÀÆtðªÁV N¢ CUÀvÀåzÀ PÉ®ªÀÅ ¸ÀÆZÀ£ÉUÀ¼À£ÀÄß ¤ÃrzÀÄÝÝ, C£ÀĪÁzÀ ¸ÀªÀÄ¥ÀðPÀ ªÀÄvÀÄÛ ¸ÀªÀÄAd¸ÀªÉAzÀÄ ªÀÄ£ÀUÀArzÉÝãÉ. PÀ£ÁðlPÀzÀ ºÉªÉÄäAiÀÄ PɼÀ¢ ¸ÀA¸ÁÜ£ÀzÀ PÀÄjvÀ «ªÀgÀ PÀ£ÀßqÉÃvÀgÀjUÀÆ vÀ®Ä¥ÀĪÀAvÁVzÀÄÝ ¸ÀAvÀ¸ÀzÀ ¸ÀAUÀwAiÀiÁVzÉ. PÉ®ªÀÅ ªÀµÀðUÀ¼À »AzÉ F PÀÈwAiÀÄ »A¢ UÀzÁåªÀvÀgÀtÂPÉAiÀÄ£ÀÄß  qÁ. GªÀiÁ ºÉUÉØAiÀĪÀgÀÄ ªÀiÁrzÀÄÝ, FUÀ EAVèµï UÀzÁåªÀvÀgÀtÂPÉ ¸ÀºÀ ºÉÆgÀ§A¢gÀĪÀÅzÀÄ PÀ£ÀßqÀ ¸ÁgÀ¸ÀévÀ¯ÉÆÃPÀzÀ ªÁå¦Û «¸ÁÛgÀªÁzÀAvÁVzÉ. PÀĪÉA¥ÀÄ «±Àé «zÁå®AiÀÄzÀ°è G¥À ¤zÉÃð±ÀPÀgÁVgÀĪÀ qÁ. gÁeÁgÁªÀÄ ºÉUÉØAiÀĪÀgÀÄ ªÀÄÄ£Àäßr §gÉ¢zÀÄÝ CAvÀgÀgÁ¶ÖçÃAiÀÄ «zÁéA¸ÀgÀÄ, ¸ÀA±ÉÆÃzsÀPÀgÀÄ ªÀÄvÀÄÛ «±Á® NzÀÄUÀ ¸ÀªÀÄÄzÁAiÀÄ vÀ®Ä¥ÀĪÀ°è EzÀÄ GvÀÛªÀÄ ¥ÀæAiÀÄvÀߪÉAzÀÄ ±ÁèXü¹zÁÝgÉ. ªÀÄÆ® PÀÈwAiÀİè E®èzÀ ºÉƸÀ avÀæUÀ¼ÀÄ, PɼÀ¢ ¸ÀA¸ÁÜ£ÀzÀ ¨sÀÆ¥Àl, PÀ«°AUÀtÚ£À PÀÄjvÀÄ n¥ÀàtÂ, PɼÀ¢ PÀ«ªÀÄ£ÉvÀ£ÀzÀ ¦Ã½UÉAiÀÄ «ªÀgÀUÀ¼ÀÄ, EvÁå¢UÀ¼ÀÄ PÀÈwAiÀÄ ªÀiË®å ºÉaѹªÉ. ¨sÁgÀvÀ ¸ÀPÁðgÀzÀ gÁ¶ÖçÃAiÀÄ ºÀ¸ÀÛ¥ÀæwUÀ¼À «ÄµÀ£ï, PɼÀ¢ ºÀ¸ÀÛ¥ÀæwUÀ¼À ¸ÀA¥À£ÀÆä® PÉÃAzÀæ, PɼÀ¢ EªÀgÀÄ ¥ÀæPÁ±ÀPÀgÁV ºÉÆgÀvÀA¢gÀĪÀ 205 ¥ÀÄlUÀ¼À F ¥ÀĸÀÛPÀzÀ ¨É¯É gÀÆ.150/- ¸ÁgÀ¸ÀévÀ ¯ÉÆÃPÀPÉÌ GvÀÛªÀÄ PÉÆqÀÄUÉ ¤ÃrzÀ PɼÀ¢ PÀ«ªÀÄ£ÉvÀ£ÀzÀ ¸ÀÄgÉñï C©ü£ÀAzÀ£ÁºÀðgÀÄ.”
------------------------------------------------------------------

ಪುಸ್ತಕದ ಬಗ್ಗೆ www.sampada.net ಅಂತರ್ಜಾಲ ತಾಣದಲ್ಲಿ ಬಂದ ಪ್ರತಿಕ್ರಿಯೆ:

"ಭಾರತದ ಬಹಳಷ್ಟು ಭಾಷೆಗಳ ಇತಿಹಾಸ ಶುರುವಾಗುವುದೇ ಅನುವಾದದ ಮೂಲಕ. ನಮ್ಮ ಭಾಷೆಯ ಕೃತಿಗಳು ಬೇರೆ ಭಾಷೆಗೆ ಅನುವಾದವಾದಾಗಲೇ ನಮ್ಮ ನೆಲದ ಸೊಗಡು ಬೇರೆಡೆಗೂ ಪಸರಿಸುವುದು. ಈ ನಿಟ್ಟಿನಲ್ಲಿ ಕವಿ ಸುರೇಶ್ ರ ಈ ಅನುವಾದ ಮೆಚ್ಚುವಂತಾದ್ದು. ಈ ಅನುವಾದದ ಮೂಲಕ ಸುರೇಶರು ಕನ್ನಡ ಭಾಷೆಗೆ, ಅನುವಾದ ಅಧ್ಯಯನಕ್ಕೆ, ಇತಿಹಾಸ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ತಮ್ಮ ಕಾಯಕ ಇಲ್ಲಿಗೆ ನಿಲ್ಲದೆ ನಿರಂತರವಾಗಿ ಮುನ್ನಡೆಯಲಿ"

ಶ್ರೀ ಶಶಿಕುಮಾರ್, ಎಂ.ಎ. (ಇಂಗ್ಲಿಷ್ ಲಿಟರೇಚರ್)
ಮೈಸೂರು.