ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, July 19, 2011


'ಶ್ರೀ ಕ್ಷೇತ್ರ ಕೂಡಲಿ ದರ್ಶನ' ಎಂಬ ಪುಸ್ತಕವನ್ನು ಕನ್ನಡದಲ್ಲಿ ಶಿವಮೊಗ್ಗದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಬರೆದಿದ್ದಾರೆ. ಕೂಡಲಿ ಕ್ಷೇತ್ರದ ಮಹಿಮೆ, ಅಲ್ಲಿರುವ ಹಲವು ದೇವಸ್ಥಾನಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ದೇವಸ್ಥಾನಗಳ ಶಿಲ್ಪಕಲೆ, ಕೂಡಲಿ ಸುತ್ತಮುತ್ತ ಇರುವ ಸಂದರ್ಶನಯೋಗ್ಯ ಸ್ಥಳಗಳು ಇತ್ಯಾದಿಗಳ ಬಗ್ಗೆ ಬಹಳ ವಿವರವಾಗಿ ಮಾಹಿತಿ ನೀಡಿದ್ದಾರೆ. 

ಈ ಪುಸ್ತಕವನ್ನು ಶಿವಮೊಗ್ಗದ ಶ್ರೀ ಕವಿ ಸುರೇಶ್ ರವರು ಆಂಗ್ಲ ಭಾಷೆಗೆ ಅನುವಾದ ಮಾಡಿರುತ್ತಾರೆ. ಕೂಡಲಿ ಕ್ಷೇತ್ರದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಅಮೃತ ಹಸ್ತದಿಂದ ಈ ಪುಸ್ತಕಗಳು 2009 ರಲ್ಲಿ ಶಿವಮೊಗ್ಗದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸಜ್ಜನರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಿವೆ.

ಪ್ರಕಟಣಾ ವರ್ಷ: 2009 :  ಪುಟಗಳು - 48  : ಬೆಲೆ: ರೂ:40/-
ಪ್ರಕಾಶಕರು: ಶ್ರೀ ಕೃಪಾ ಪ್ರಕಾಶನ, ಶಿವಮೊಗ್ಗ (08182-254217)

No comments:

Post a Comment