ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, July 28, 2011


Release of the book: "Utkrustadedege" of Kavi Suresh - A collection of articles in Kannada - Release by Sri Manu Baligar

ಸದ್ವಿಚಾರ, ವ್ಯಕ್ತತ್ವ ವಿಕಸನ ಮತ್ತಿತರ ವಿಚಾರಗಳನ್ನೊಳಗೊಂಡ ಕವಿ ಸುರೇಶರ ಲೇಖನಗಳ ಸಂಗ್ರಹ


ಪುಟಗಳು: 90+8  :  ಪ್ರಥಮ ಮುದ್ರಣ: 2008  : ಬೆಲೆ: ರೂ.80/-

ಪ್ರಕಾಶಕರು: ಕವಿ ಪ್ರಕಾಶನ, "ಸೌಪರ್ಣಿಕಾ", 3ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಬಸವೇಶ್ವರನಗರ, ಶಿವಮೊಗ್ಗ.

"ಮಾನಸೋದ್ಧಾರ ಮತ್ತು ದೈವ ಸಾಕ್ಷಾತ್ಕಾರ' ದಿಂದ ಪ್ರಾರಂಭಿಸಿ "ಕೆಲವು ಹಿಂದೂ ಸಂಪ್ರದಾಯಗಳು' ಎಂಬ ಒಟ್ಟು 24 ಶೀರ್ಷಿಕೆಗಳ ವಿವಿಧ ವೈಚಾರಿಕ ವಿಷಯಗಳನ್ನು 90 ಪುಟಗಳಲ್ಲಿ ಅಳವಡಿಸಿ ಕವಿ ವೆಂ|| ಸುರೇಶ್ ರವರು ತಮ್ಮ ಈ ಚೊಚ್ಚಲ ಕೃತಿಯನ್ನು ರಚಿಸಿದ್ದಾರೆ. ಪುಸ್ತಕವನ್ನು ಓದುತ್ತ ಹೋದಂತೆ ಶ್ರೀ ಸುರೇಶ್ ರವರ ಪ್ರೌಢವಿಚಾರ ಶೈಲಿ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಇದು ಅವರ ಚೊಚ್ಚಲ ಕೃತಿ ಎಂದು ಅನಿಸುವುದೇ ಇಲ್ಲ. ಇನ್ನು ಅವರು ಪ್ರಕಟಿಸುತ್ತಿರುವ ಗ್ರಂಥಗಳ ಮುದ್ರಣ ವಿನ್ಯಾಸ ಮುಂತಾದ ಗುಣಮಟ್ಟಗಳು ಆಕರ್ಷಣೀಯವಾಗಿರುವುದು ಅಭಿನಂದನೀಯ. ಶ್ರೀ ಸುರೇಶ್ ರವರ ೀ ಸಾಧನೆಗಳಿಗೆ ವ್ಯಾಪಕ ಬೆಂಬಲ ದೊರೆಯಲಿ. ಮುಂದೆಯೂ ಅವರಿಂದ ಉತ್ತಮ ಕೃತಿಗಳು ಪ್ರಕಟವಾಗುತ್ತ ಸಾರಸ್ವತ ಭಂಡಾರವನ್ನು ಸಂಪನ್ನಗೊಳಿಸಲಿ! ಎಂದು ಆಶಿಸುತ್ತೇವೆ"

                                                                              - ಶ್ರೀ ಹರಿಹರಪುರ ಬಿ.ಸುಬ್ರಹ್ಮಣ್ಯಂ, ಸಂಪಾದಕರು,
                                                                                 "ಸ್ವಯಂಪ್ರಕಾಶ" ಮಾಸಪತ್ರಿಕೆ [ಜುಲೈ 2008]


Kavi Suresh, Gopinath, Diwakar, Manu Baligar, NK Narayan
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಶ್ರೀ ಮನು ಬಳಿಗಾರ್ ರವರಿಂದ ಕೃತಿ ಬಿಡುಗಡೆ.
ಉಪಸ್ಥಿತಿ: ಪ್ರೊ.ದಿವಾಕರ್ ರಾವ್ ನಾಡಿಗೇರ್, ನಿರ್ದೇಶಕರು, ಎಡುರೈಟ್ ಕಾಲೇಜ್, ಶಿವಮೊಗ್ಗ, ಶ್ರೀ ಗೋಪಿನಾಥ್, ಮಾಲೀಕರು, ಮಥುರಾ ಪ್ಯಾರಾಡೈಸ್ ಹೊಟೆಲ್, ಶ್ರೀ ಎನ್.ಕೆ. ನಾರಾಯಣ, ನಿವೃತ್ತ ಹಿರಿಯ ಕೆ.ಎ.ಎಸ್. ಅಧಿಕಾರಿಗಳು.

2 comments:

  1. Congratulations! ಮತ್ತಷ್ಟು ಬರೆಯಿರಿ, ಶುಭಕೋರುತ್ತೇನೆ.

    ReplyDelete
  2. ಧನ್ಯವಾದಗಳು ಶ್ರೀ ಭಟ್ ರವರೇ.

    ReplyDelete