ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, January 24, 2011

'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ

ಆತ್ಮೀಯರೇ,
                  ದಿನಾಂಕ 30-01-2011ರಂದು ಹಾಸನದ ಶ್ರೀ ಶಂಕರಮಠದಲ್ಲಿ ಬೆ. 9-30ರಿಂದ 'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ ನಡೆಯಲಿದ್ದು ಎಲ್ಲಾ ಬಂಧುಗಳು ಭಾಗವಹಿಸಲು ಕೋರಿದೆ. ಹರಿಹರಪುರ ಶ್ರೀಧರ್ ಸಂಪಾದಕರು ಮತ್ತು ಕವಿನಾಗರಾಜರು ಗೌ.ಸಂಪಾದಕರಾಗಿರುವ ಈ ತಾಣದಲ್ಲಿ ಕವಿ ಸುರೇಶರು  ವೇದಸುಧೆ ಬಳಗದ ಸಕ್ರಿಯ ಸದಸ್ಯರು ಮತ್ತು ಲೇಖಕರಾಗಿದ್ದಾರೆ. ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಸಿ.ಡಿ. ಬಿಡುಗಡೆ, 'ಆರೋಗ್ಯಕರ ಬದುಕು ಮತ್ತು ವೇದ' ಎಂಬ ವಿಚಾರಸಂಕಿರಣ, ಕು. ಬಿ.ಎಸ್.ಆರ್. ಅಂಬಿಕಾಳ ವಯಲಿನ್ ವಾದನ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
                  ಅದೇ ದಿನ ಅದೇ ಸ್ಥಳದಲ್ಲಿ ಮ.3-00ರಿಂದ 'ಮನೆಮನೆಕವಿಗೋಷ್ಠಿ'ಯ 14ನೇ ವಾರ್ಷಿಕೋತ್ಸವ ಜರುಗಲಿದೆ. ಕವಿನಾಗರಾಜರ ಚಿಂತನಶೀಲ ಮುಕ್ತಕಗಳು 'ಮೂಢ ಉವಾಚ' ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 
                  ತಮ್ಮೆಲ್ಲರಿಗೂ ಆದರದ, ಆತ್ಮೀಯ ಆಹ್ವಾನವಿದೆ.
 ಆಹ್ವಾನ ಪತ್ರಿಕೆ ತಮ್ಮ ಗಮನಕ್ಕಾಗಿ:


No comments:

Post a Comment