ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, January 31, 2011

ಮೂಢ ಉವಾಚ


ಲೇಖಕರು: ಶ್ರೀ ಕವಿ ನಾಗರಾಜ್, ಹಾಸನ.
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ - ಶಾಖೆ: ಹಾಸನ
ಪುಟಗಳು: 76+4 : ಪ್ರಕಟಣಾ ವರ್ಷ: 2011   :  ಬೆಲೆ: ರೂ.20/-

ಜೀವನದ ಅನುಭವದ ಮೂಸೆಯಿಂದ ಮೂಡಿಬಂದ ಮಾತುಗಳಿಗೆ ಶ್ರೀ ಕವಿ ನಾಗರಾಜ್ ರವರು ಇಲ್ಲಿ ಅಕ್ಷರ ರೂಪವನ್ನು ಮುಕ್ತಕಗಳ ರೂಪದಲ್ಲಿ ಬಲು ಸುಂದರವಾಗಿ ನೀಡಿದ್ದಾರೆ. ಮನಸ್ಸಿಗೆ ಮುದ ನೀಡುವಂತಹ ಒಂದು ಉತ್ತಮ ಕೃತಿ. ಕೆಳದಿ ಕವಿ ಮನೆತನದ ಸಾಧನೆಗಳಿಗೆ ಮತ್ತೊಂದು ಗರಿಯೆಂದರೆ ಉತ್ಪ್ರೇಕ್ಷೆಯಲ್ಲ. ಕೆಲವು ಮುಕ್ತಕಗಳನ್ನು ನೋಡಿ:

'ಅತ್ತ ಮುಖ ಇತ್ತಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||'

'ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ |
ಶುಭ ಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ ||'

'ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು |
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನಬೇಕು ಮೂಢ ||'      ..............



No comments:

Post a Comment