ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, February 1, 2011

ಕವನಗಳು

        ಹಳೆ ಬೇರು ಹೊಸ ಚಿಗುರು
ಇರಲು ಚೆಂದ ಹಳೆ ಬೇರು ಹೊಸ ಚಿಗುರು,
ಹಾಡಲು ಅಂದ ಹಳೆ ರಾಗ ಹೊಸ ಗಾನ,
ಕೇಳಲು ಆನಂದ ಹಳೆ ವಿಷಯ ಹೊಸ ವಿಸ್ಮಯ,
ಬರೆಯಲು ಸದಾ ಹಳೆ ಸಾಹಿತ್ಯ ಹೊಸ ವಿಚಾರ,
ನುಡಿಯಲು ಕಂದ ಹಳೆ ಭಾಷೆ ಹೊಸ ನುಡಿ,
ಹರಡಲು ಗಂಧ ಹಳೆಗಾಳಿ ಹೊಸ ಪರಿಮಳ,
ಇರುವುದು ಬಂಧ ಹಳೆ ಜನ ಹೊಸ ಮನ,
ಸವಿಯಲು ಮುದ ಹಳೆ ಅಡುಗೆ ಹೊಸ ರುಚಿ,
ಸೇರಲು ಬಂದ ಹಳೆ ಭಾವದ ಹೊಸ ಜನ,
ನೆಂಟರು ತಂದ ಹಳೆ ಸಂಬಂಧ ಹೊಸ ಸಂಭ್ರಮ!
             - ಹೇಮಾ ಮಾಲತೇಶ, ಶಿವಮೊಗ್ಗ.

                         ****
         ಹೀಗಿರಬೇಕು  ನಮ್ಮವ
 ಕವಿ, ಕರುಣಿ, ಕಣ್ಮಣಿ, ಕಷ್ಟ ಸಹಿಷ್ಣು
ವಿ ವಿನಯಿ, ವಿಶ್ವಾಸಿ, ವಿಜಯಿ, ವಿದ್ಯಾವಂತ
 ಮಮತಾಮಯಿ, ಮಂದಸ್ಮಿತ, ಮನೋಹರ
ನೆ ನೆಂಟ, ನೆರಳಾಗಿರುವ, ನೆಮ್ಮದಿವಂತ
 ತಪಸ್ವಿ, ತನ್ಮಯಿ, ತಪ್ಪು ಮಾಡದವ
 ನಮ್ರ., ನಮ್ಮವ, ನಂಬಿಕಸ್ಥ, ನಡೆನುಡಿವಂತ
 ದಯಾವಂತ, ದಾರ್ಶನಿಕ, ದಕ್ಷ, ಧರ್ಮಿಷ್ಟ
 ವಜ್ರಕಾಯ, ವಾಗ್ಮಿ, ವಾತ್ಸಲ್ಯಮಯಿ, ವರ್ಚಸ್ವಿ
            
            
  - ಹೇಮಾ ಮಾಲತೇಶ, ಶಿವಮೊಗ್ಗ.                       * * *
                        ಹಣೆಬರಹ

       ಹೆತ್ತವರು ಬರೆವುದಿಲ್ಲ ಹಣೆಯಲ್ಲಿ
       ಬರುವಾಗ ಬರೆದು ಕಳಿಸುವನು ಅಲ್ಲಿ
       ಬರೆದುದನು ಓದಲಾಗದು ನಮ್ಮಲ್ಲಿ
       ಅಂತೂ ಸಿಲುಕಿರುವೆವು ಗೊಂದಲದಲ್ಲಿ ! !
                            -ಕವಿಶ್ರೀ (ಕೆ. ಶ್ರೀಕಾಂತ್)
                                  * * *
(ಕವಿಕಿರಣದ ಡಿಸೆಂಬರ್, 2008ರ ಸಂಚಿಕೆಯಿಂದ)

No comments:

Post a Comment