ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, October 19, 2010

ವಂಶ ಋಣ

ಪರಿವರ್ತಿನಿ ಸಂಸಾರೇ ಮೃತ: ಕೋವಾನ ಜಾಯತೇ
ಸಜಾತೋ ಯೇನ ಜಾತೇನ ಯಾತಿ ವಂಶ: ಸಮುನ್ನತಿಮ್ ||

ಚಕ್ರದಂತೆ ಸುತ್ತುತ್ತಿರುವ ಜನನ-ಮರಣ ಪ್ರವಾಹರೂಪ ಸಂಸಾರದಲ್ಲಿ ಸತ್ತವನು ಯಾವನು ತಾನೇ ಮತ್ತೆ ಹುಟ್ಟುವುದಿಲ್ಲ? (ಎಲ್ಲರೂ ಪುನರ್ಜನ್ಮ ತಾಳುವರು). ಆದರೆ ಯಾವಾತ ಹುಟ್ಟಿದುದರಿಂದ ಅವನ ವಂಶ ಉನ್ನತಿ ಪಡೆಯುವುದೋ ಅವನು ಮಾತ್ರ ಹುಟ್ಟಿ ಸಾರ್ಥಕನಾಗುವನು.

ಸಮಾಜಕ್ಕೆ ಮತ್ತು ದೇಶಕ್ಕೆ ನಾವೇನು ಮಾಡಿದೆವು ಎಂಬುದು ಎರಡನೇ ಮಾತು. ಮೇಲೆ ಹೇಳಿದಂತೆ ನಮ್ಮ ವಂಶಕ್ಕೇ ನಮ್ಮ ಕೊಡುಗೆ ಏನು ಎಂಬುದು ಕೂಡ ಬಹುಮುಖ್ಯವಾದ ವಿಚಾರ. ವಂಶಕ್ಕೆ ನೀಡಿದ ಕೊಡುಗೆ ಒಂದು ರೀತಿ ಸಮಾಜಕ್ಕೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆಯೇ ತಾನೆ. ಈ ನಿಟ್ಟಿನಲ್ಲಿ ಕೆಳದಿ ಕವಿ ಮನೆತನದ ಕೊಡುಗೆ ಅಪಾರ. ಆ ಪರಂಪರೆಯನ್ನು ಮುಂದುವರೆಸಿ ನಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ಬನ್ನಿ ಈ ಕಾರ್ಯದಲ್ಲಿ ನಾವೆಲ್ಲ ಕೈಗೂಡಿಸೋಣ.

No comments:

Post a Comment