ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, October 28, 2010

ವೆಂಕಣ್ಣಕವಿ ವಿರಚಿತ ಕೃತಿಗಳು


ರಾಗ: ಮಧ್ಯಮಾವತಿ : ಆದಿತಾಳ
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ

ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||


ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ

ಮೌನ ಬೇಡ ಮಣಿ ಮಾಲಿಕೆ ಬೇಡ

ಧ್ಯಾನ ಬೇಡ ಪಶುವಧೆಗಳು ಬೇಡ || 1 ||


ದೇಶ ಕಾಲ ಪಾತ್ರವ ನೋಡಲು ಬೇಡ

ಕಾಷಾಯಾಂಬರ ಧಾರಣೆ ಬೇಡ

ಭಾಸುರ ಜಡೆಯನು ಬೆಳೆಸಲು ಬೇಡ

ಈ ಶರೀರವನೆ ದಂಡಿಸಬೇಡ || 2 ||


ಕಾಲನ ದೂತರು ಎಳೆಯುವ ಮುನ್ನ

ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ-

ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು || 3 ||

No comments:

Post a Comment