ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, November 7, 2010

ರಾಮಾಯಣ ಸಾರ



ಎಸ್.ಕೆ.ಲಿಂಗಣ್ಣಯ್ಯನವರು "ರಾಮಾಯಣ ಸಾರ" ಎಂಬ ಶೀರ್ಷಿಕೆಯಡಿಯಲ್ಲಿ ರಾಮಾಯಣದ ಎಲ್ಲ ಕಾಂಡಗಳ ಶ್ಲೋಕ ಮತ್ತು ಸಂಕ್ಷಿಪ್ತ ವಿವರಣೆಯನ್ನು ಪ್ರಕಟಿಸಿದ್ದಾರೆ. ಬಾಲ ಕಾಂಡ, ಅರಣ್ಯ ಕಾಂಡ, ಸುಂದರ ಕಾಂಡ ಮತ್ತು ಯುದ್ಧ ಕಾಂಡದ ಪುಸ್ತಕಗಳು ಮಾತ್ರಾ ಸಿಕ್ಕಿವೆ (ಅವೂ ಬಹಳ ಜೀಣಾವಸ್ಥೆಯಲ್ಲಿವೆ). ಅವುಗಳ ಮುಖಪುಟಗಳನ್ನು ಮೇಲೆ ನೀಡಲಾಗಿದೆ. ಅರಣ್ಯಕಾಂಡ ಪುಸ್ತಕ 1935 ರಲ್ಲಿ ಪ್ರಕಟವಾಗಿದ್ದರೆ ಉಳಿದವುಗಳು 1934 ರಲ್ಲಿ ಪ್ರಕಟವಾಗಿವೆ. ಶ್ರೀ ಗೌರೀನಿಲಯ ಮುದ್ರಣಾಲಯದಲ್ಲಿ ಇವುಗಳು ಮುದ್ರಿಸಲ್ಪಟ್ಟಿವೆ. ಪ್ರತಿ ಪುಸ್ತಕದ ಆಗಿನ ಬೆಲೆ : ಎರಡೂವರಾಣೆ!!

ಬಾಲಕಾಂಡ ದಿಂದ ಆಯ್ದ ಒಂದು ಶ್ಲೋಕ ಮತ್ತು ವಿವರಣೆಯನ್ನು ಪುಸ್ತಕಗಳಲ್ಲಿರುವ ಒಕ್ಕಣೆಯ ಉದಾಹರಣೆಯಾಗಿ ಇಲ್ಲಿ ನೀಡಲಾಗಿದೆ:

ತಸ್ಯ ಚಿಂತಯಮಾನಸ್ಯ ಮಹರ್ಷೇರ್ಭಾವಿತಾತ್ಮನ: |
ಅಗೃಹ್ಣೀತಾಂತತ: ಪಾದೌ ಮುನಿವೇಷೌ ಕುಶೀಲತೌ ||
ತತಸ್ತು ತೌರಾಮವಚ: ಪ್ರಚೋದಿತಾವಗಾಯತಾಂ ಮಾರ್ಗವಿಧಾನಸಂಪದಾಂ |
ಸಚಾಪಿರಾಮ: ಪರಿಷದ್ಯತಶ್ಯನೈರ್ಬುಭೂಷಯಾಸಕ್ತ ಮನಾಬಭೂವಹ ||

ಹಾಗೇನೇ ವಾಲ್ಮೀಕಿಮುನಿಯು ಆ ರಾಮಚರಿತ್ರೆಯನ್ನು 24000 ಶ್ಲೋಕಪೂರಿತವಾದ ರಾಮಾಯಣ ಕಾವ್ಯವಾಗಿ ರಚಿಸಿ ಸಮೀಪದಲ್ಲಿ ಮುನಿವೇಷಧಾರಿಗಳಾಗಿ ನಿಂತಿದ್ದ ಶ್ರೀ ರಾಮನ ಪುತ್ರರಾದ ಕುಶಲವರಿಗೆ ಉಪದೇಶ ಮಾಡಿದನು.
ಶ್ರೀ ರಾಮನು ಅಶ್ವಮೇಧಯಾಗವನ್ನು ಮಾಡಿದ ಕಾಲದಲ್ಲಿ ಮಹರ್ಷಿಗಳೆಲ್ಲಾ ಸೇರಿದ್ದ ಕಾಲದಲ್ಲಿ ವಾಲ್ಮೀಕರ ಅನುಜ್ಙೆಯಂತೆ ಬಾಲಕರಾದ ಕುಶಲವರು ಸಂಗೀತಶಾಸ್ತ್ರಾನುಸಾರವಾಗಿ ಆ ರಾಮಾಯಣವನ್ನೆಲ್ಲಾ ಗಾನ ಮಾಡಲು, ಶ್ರೀ ರಾಮನು ತನ್ನ ಚರಿತ್ರೆಯ ಶ್ರವಣದಲ್ಲಿ ಬಹು ಉತ್ಸಾಹವುಳ್ಳವನಾದನು.

[ಉಳಿದ ಕಾಂಡಗಳ ಪುಸ್ತಕಗಳು ಯಾರಲ್ಲಾದರೂ ಲಭ್ಯವಿದ್ದಲ್ಲಿ ಅವುಗಳ ಮುಖಪುಟಗಳನ್ನು ಮೇಲಿನಂತೆ ಪ್ರಕಟಿಸಲು ಸಹಕರಿಸಲು ಕೋರಿದೆ]

[ಕ್ರಪೆ: ಶ್ರೀ ಎಸ್.ಕೆ.ರಾಮರಾವ್ ಮತ್ತು ಶ್ರೀ ಕೆಳದಿ ಗುಂಡಾಜೊಯಿಸ್]

No comments:

Post a Comment