ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, November 14, 2010

ಚೌಡಮ್ಮ ದೇವಿ - ಕವಿ ವಂಶದ ಕಾವಲು ದೇವತೆ


ಕೆಳದಿ ಕವಿ ಮನೆತನವನ್ನು ಅನಾದಿ ಕಾಲದಿಂದಲೂ ಚೌಡಮ್ಮ ದೇವಿ ರಕ್ಷಿಸುತ್ತಿರುವಳು ಎಂದು ತಿಳಿದುಬಂದಿದೆ. ಚೌಡಮ್ಮ ದೇವಿ ಸ್ವರೂಪವಾದ ಮೇಲಿನ ಕಲ್ಲು ಕೆಳದಿ ಕವಿ ಮನೆತನಕ್ಕೆ ಸೇರಿದ ಶ್ರೀ ಕವಿ ನಾಗರಾಜಭಟ್ಟರ ನಿವೇಶನದಲ್ಲಿರುತ್ತದೆ. ಈಗಲೂ ಕವಿ ಮನೆತನದವರ ಕೆಲವು ಮನೆಗಳಲ್ಲಿ ಶುಭ ಕಾರ್ಯ ನಡೆಯುವಾಗ ದೇವಿಗೆ ಬಾಗಿನ-ನೈವೇದ್ಯ ಸಲ್ಲಿಸುವ ಪ್ರತೀತಿ ಇದೆ. ಕವಿ ಮನೆತನದ ಎರಡನೇ ಸಮಾವೇಶ ಕೆಳದಿಯ ಶ್ರೀ ಕವಿ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭದಲ್ಲಿಯೂ ಕೂಡ ಪೂರ್ವಭಾವಿಯಾಗಿ ಚೌಡಮ್ಮ ದೇವಿಗೆ ವಿದ್ಯುಕ್ತ ಪೂಜೆ ಸಲ್ಲಿಸಲಾಯಿತು. ಇದನ್ನು ಸಂರಕ್ಷಿಸಲು ಮತ್ತು ಸೂಕ್ತ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

[ಫೋಟೋ: ಕವಿ ಬಿ.ಎಸ್.ಆರ್.ದೀಪಕ್]

No comments:

Post a Comment